| |||||||||||||||||
|
ಕಾನೂನು ಸಾಕ್ಷರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯವು ದಿನಾಂಕ 17-2-2010 ರಂದು ಉಳ್ಳಾಲ ಪುರಸಭೆಗೆ ಆಗಮಿಸಿದಾಗ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾದೀಶರಾದ ಶ್ರೀ ಕೆ.ವಿ.ಎಮ್. ಪಠೇಲ್ ಇವರೊಂದಿಗೆ ಉಳ್ಳಾಲ ಪುರಸಭಾ ಅಧ್ಯಕ್ಷರಾದ ಶ್ರೀ ಯು.ಎ. ಇಸ್ಮಾಯಿಲ್ ಸ್ವಾಗತಿಸಿದರು.
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾದೀಶರಾದ ಶ್ರೀ ಕೆ.ವಿ.ಎಮ್. ಪಠೇಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಶಾಸಕರಾದ ಶ್ರೀ ಯು.ಟಿ.ಖಾದರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಶಾಂತರಾಜ್, ವಕೀಲರುಗಳಾದ ಶ್ರೀ ದೇವದಾಸ್ರಾವ್, ಶ್ರೀ ರವೀಂದ್ರ ಮುನಿಪ್ಪಾಡಿ, ಜಿಲ್ಲಾಧಿಕಾರಿ ಕಚೇರಿಯ ಶ್ರೀ ಕೆ.ಆರ್.ನಾಥ್, ಜನ ಶಿಕ್ಷಣ ಟ್ರಸ್ಟ್ನ ಶ್ರೀ ಶೀನ ಶೆಟ್ಟಿ ಮತ್ತು ಶ್ರೀ ಕೃಷ್ಣ ಮೂಲ್ಯ, ಪುರಸಭಾ ಅಧ್ಯಕ್ಷಾರದ ಶ್ರೀ ಯು.ಎ.ಇಸ್ಮಾಯಿಲ್, ಸ್ಥಾಯಿ ಸಮಿತಿ ಅಧ್ಯಕ್ಷಾರದ ಶ್ರೀ ಮುಸ್ತಾಫ, ಮುಖ್ಯಾಧಿಕಾರಿ ಶ್ರೀ ಸದಾನಂದ ಉಪಸ್ಥಿತರಿದ್ದರು.
________________________________________________________________________________________________________________________________________
ಉಳ್ಳಾಲ ಪುರಸಭೆಯ SJSRY ಯೋಜನೆಯಡಿ ರೂ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಒಂಭತ್ತುಕೆರೆ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕರಾದ ಶ್ರೀ ಯು.ಟಿ ಖಾದರ್ ರವರು ನೆರವೇರಿಸಿದರು. ಪುರಸಭಾ ಅಧ್ಯಕ್ಷರಾದ ಶ್ರೀ ಯು.ಎ.ಇಸ್ಮಾಯಿಲ್ , ಉಪಾಧ್ಯಕ್ಷರಾದ ಶ್ರೀ ದಿನೇಶ್ ರೈ, ಮುಖ್ಯಾಧಿಕಾರಿ ಶ್ರೀ ಸದಾನಂದ, CAO ಶ್ರೀಮತಿ ವಾಣಿ ಆಳ್ವ, ಸಮುದಾಯ ಸಂಘಟಕರಾದ ಶ್ರೀ ರೋಹಿನಾಥ್, CDS ಅಧ್ಯಕ್ಷೆ ಶ್ರೀಮತಿ ಭಾರತಿ ಮತ್ತು ಇತರ ನಾಗರಿಕತು ಭಾಗವಹಿಸಿದ್ದರು
____________________________________________________________________________________________________________________
ದಿನಾಂಕ 24-10-2009 ರಂದು ಸಂಪೂರ್ಣ ನಗರ ಸ್ವಚ್ಚತಾ ಆಂದೋಲನಾ ಸಂವಾದ ಸಂಕಲ್ಪ ಮಾಹಿತಿ ಶಿಬಿರವು ಉಳ್ಳಾಲ ಪುರಸಭಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಡನೆಯನ್ನು ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕರಾದ ಶ್ರೀ ಕೆ.ಆರ್.ನಾಥ್ ನಡೆಸಿಕೊಟ್ಟರು.ಆಪ್ನಾದೇಶ್ ಮಾದರಿ ಜನಶಿಕ್ಷಣ ಸಮಿತಿ ಸಂಚಾಲಕರಾದ ಶ್ರೀ ಶೀನ ಶೆಟ್ಟಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಪೌರಾಢಳಿತ ನಿರ್ದೇಶನಾಲಯದ ಆದೇಶದಂತೆ ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲೆ, ಪ್ರಬಂದ, ಭಾಷಣ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಯಿತು. ಪುರಸಭಾ ಅಧ್ಯಕ್ಷರಾದ ಶ್ರೀ ಯು.ಎ.ಇಸ್ಮಾಯಿಲ್ ಸ್ವಾಗತಿಸಿದರು. ಕಮ್ಯುನಿಟಿ ಅಪೇರ್ ಆಪೀಸರ್ ವಾಣಿ ವಿ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಸಮುಧಾಯ ಸಂಘಟಕರಾದ ಶ್ರೀ ರೋಹಿನಾಥ್ ವಂದಿಸಿದರು.
|